Posts

ನೀರು

Image
  ಇವತ್ತು  ಬೆಳಿಗ್ಗೆ ವಾಕ್ ಹೋಗುವಾಗ ಒಂದು ದೊಡ್ಡ ಮನೆಯ ಮುಂದೆ ಉದ್ದನೆಯ ಪೈಪೊಂದರಲ್ಲಿ ನೀರನ್ನು ದಾರಿಯುದ್ದಕ್ಕೂ ಬಿಡುತ್ತಿ ಬಿಡುತ್ತಿದ್ದರು ಮನೆಯ ಮಾಲೀಕ ಇರಬಹುದು,  ಅವರು ನೀರನ್ನು ಹಾಳು ಮಾಡುತ್ತಿರುವುದನ್ನು ನೋಡಿ, ನನ್ನ ಮನಸ್ಸು ಸ್ವಲ್ಪ ಕಸಿವಿಸಿ ಗೊಂಡಿತು. ನೀರಿನ ಬೆಲೆ ಗೊತ್ತಿಲ್ಲದವರು ಬೋರ್ವೆಲ್ ಹಾಕಿಸಿಕೊಂಡು ಭೂಮಿಯಲ್ಲಿರುವ ನೀರನ್ನು ಹೇಗೆ ಬೇಕೋ ಹಾಗೆ ಉಪಯೋಗಿಸುತ್ತಾರೆ, ಬೋರ್ವೆಲ್ ಎಷ್ಟು ಜನ ಹಾಕುತ್ತಾರೆ, ಹೀಗೆ ಜನರೆಲ್ಲಾ ತಮ್ಮ  ಸ್ವಾರ್ಥಕ್ಕಾಗಿ ಬೋರ್ವೆಲ್ ತೆಗೆಸಿ ಕೊನೆಗೊಂದು ದಿನ ಭೂಮಿ ಒಳಗಿಂದಲೂ ನೀರು ಸಿಗದಂತೆ ಆಗಬಹುದೇನೋ ಆ ದೇವರೇ ಬಲ್ಲ.  ಹಿಂದೆ ಎಲ್ಲರೂ ನೀರಿಗಾಗಿ ನದಿ ಅಥವಾ ಬಾವಿಗೆ ಮೊರೆಹೋಗುತ್ತಿದ್ದರು. ಈಗಂತೂ ನಮ್ಮ ನದಿಗಳು ಹೆಸರು ಕೇಳದಂತೆ ಮಾಯವಾಗಿವೆ.  ಬೆಂಗಳೂರಿನ ವೃಷಭಾವತಿ ನದಿ ಈಗ  ಬೆಂಗಳೂರು ನಗರದ ಗಲೀಜನ್ನು ಹರಿಸಿಕೊಂಡು ಚರಂಡಿಯಾಗಿ ಹರಿಯುತ್ತಿದೆ. ಇಂದಿನ ವೇಗದ ಜೀವನದಲ್ಲಿ ನಾವು ಎಷ್ಟು  ಸ್ವಾರ್ಥಿಗಳು  ಆಗಿದ್ದೇವೆ. ಎಷ್ಟೋ ಜನಕ್ಕೆ  ಬೆಂಗಳೂರಿನಲ್ಲಿ  ಹಿಂದೊಮ್ಮೆ ನದಿಯು ಇದ್ದಿದ್ದು  ನಿಜವೇ ಅನ್ನುವಷ್ಟು ವೃಷಭಾವತಿ ನದಿ ಹಾಳಾಗಿದೆ.     ಕರ್ನಾಟಕದ ಜನಸಂಖ್ಯೆ ಕೋಟಿ ಕೋಟಿ,  ಬೆಂಗಳೂರಿನಲ್ಲಿ ಒಬ್ಬನಲ್ಲಿ ಕೂಡ ಯೋಚನೆ ಬರಲಿಲ್ಲವೇ,  ನಾಳೆ ದಿನ ನಾವು ನಮ್ಮ ನೆರಳಂತೆ ...

ಅನ್ನ ಕೊಟ್ಟ ಭಾಷೆ

 ಎಂದಿನಂತೆ ನನ್ನ ಯೋಗ ತರಬೇತಿ ಮುಗಿಸಿ ಬರುವಾಗ ನನ್ನ ಗೆಳತಿಗೆ ಇಂದು ಚಿತ್ರಕಲಾ ಪರಿಷತ್ ಗೆ ಹೋಗೋಣವೆಂದರೆ ಯಥಾಪ್ರಕಾರ  ನಕಾರವೆ ಬಂದಿದ್ದು, ಹೋಗಲಿ ಹೂಕುಂಡ ತೆಗೆದುಕೊಂಡು ಹೋಗೋಣ ಅಂತ ಹೇಳಿದೆ, ಸರಿ ಎಂದು ಒಪ್ಪಿದರು ಮನೆಯ ಹತ್ತಿರವೇ ಒಂದು ಪುಟ್ಟ ( ಸಸಿಕಟ್ಟುವ ಸ್ಥಳ) ನರ್ಸರಿಗೆ ಹೋದೆವು.  ಅಲ್ಲಿ ತರಾವರಿ ಹೂಕುಂಡ ಗಳಿದ್ದವು ಅಲ್ಲಿ ಬಂದಿಳಿದಾಗ ಸುಮಾರು ಇಪ್ಪತ್ತೈದು ವರ್ಷದ ಹುಡುಗ ಹೊರಗೆ ಬಂದ,  ನಾನು ಕನ್ನಡ- ಹಿಂದಿ ಅಂತ ಕೇಳಿದೆ... ಏಕೆಂದರೆ ಮಾತನಾಡಲು ಶುರು ಮಾಡಿದಮೇಲೆ ಕನ್ನಡ ಬರಲ್ಲ ಎನ್ನುವವರು ಬಹುಮಂದಿ ಆದ್ದರಿಂದ ಮೊದಲೇ ಖಾತ್ರಿಪಡಿಸಿಕೊಳ್ಳಲು ಕೇಳಿದೆ.   ಆ ಹುಡುಗನು ಕನ್ನಡ ಆದರೂ ಪರವಾಗಿಲ್ಲ ಎಂದು ಕನ್ನಡವನ್ನು ಮುತ್ತಿನಂತೆ ಮಾತನಾಡಿದನು, ನಾನು ಕಕ್ಕಾಬಿಕ್ಕಿ.  ನನಗೆ ಜನಗಳ ಬಗ್ಗೆ ತಿಳಿಯಲು ಬಲು ಕಾತುರ  ಅವನನ್ನು ಉದ್ದೇಶಿಸಿ, ಕನ್ನಡ ಹೇಗೆ ಬರುತ್ತೆ? ನೀನು ಎಲ್ಲಿಂದ ಬಂದಿರುವುದು? ಅಂದಾಗ ನಾನು ಲಕ್ನೋ ಇಂದ ಬಂದಿರುವೆ,  ನನ್ನದು ಅಪ್ಪ ಅಮ್ಮ ನಾಲ್ಕು ಜನ ಅಣ್ಣ ತಮ್ಮಂದಿರು ಮತ್ತು ಇಬ್ಬರು ತಂಗಿಯರನ್ನು ಒಡಗೂಡಿದ ಸಂಸಾರ ಐದು ವರ್ಷದಿಂದ ನಾನು ಇಲ್ಲಿ ವ್ಯಾಪಾರದಲ್ಲಿ ತೊಡಗಿರುವ  ತಂದೆ ತಾಯಿಗೆ ಹಣವನ್ನು ಕಳಿಸುತ್ತೇನೆ ಎಂದನು. ನಾನು ಅವನನ್ನು ಪ್ರಶಂಸಿಸುತ್ತಾ ಕನ್ನಡ ತುಂಬಾ ಚೆನ್ನಾಗಿ  ಮಾತನಾಡುತ್ತಿರುವೆ, ಹೇಗೆ ಎಂದಾಗ, 5 ವರ...

ನೆನಪುಗಳು ಭಾರವಾದಾಗ-ಅದ್ಯಾಯ ಒಂದು

ಅಮ್ಮನ ಮನೆಯ ಸುತ್ತ ಪುಟ್ಟ ತೋಟ , ಹೂವು , ಗಿಡಮರಗಳು , ಚಿಲಿಪಿಲಿಗುಟ್ಟುವ ಹಕ್ಕಿಗಳು , ಸುಂದರ ಚಿಟ್ಟೆಗಳು , ಅಲ್ಲಿ  ಇರುವ ಕಲ್ಲಿನ ಆಸನ ದಲ್ಲಿ ಕೂತರೆ ಪ್ರಪಂಚವೇ ಮರೆತು ಹೋಗುತ್ತದೆ . ಅಮ್ಮನಿಗೆ ಏನಾದರೂ ಹೇಳಬೇಕೆಂದರೆ ಅಲ್ಲಿಗೆ ಹೋಗಿ ಕುಳಿತು ಮಾತನಾಡುವ ಕ್ರಮ . ಇಂದು ಹಾಗೇ ಕುಳಿತಿರುವಾಗ ಅಮ್ಮ ತನ್ನ ಕಷ್ಟದ ದಿನಗಳನ್ನು ನೆನೆಯುತ್ತಿದ್ದರು . ಹೀಗೆ ತಮ್ಮ ಹಳೆಯ ದಿನಗಳನ್ನು ನೆನೆಯುತ್ತ ನೆಡೆದ ಒಂದು ಘಟನೆ ಮೆಲಕುತ್ತ ಇರಲು , ನನಗೆ ಹೇಳಿದರು ನೀನು ಬರಿ , ಬರೆದಾಗ " ನೆನಪುಗಳು ಭಾರವಾದಾಗ " ಎಂದು ಶೀರ್ಷಿಕೆ ಇಡು ಎಂದರು . ಹೇಳಿ ಬಹಳ ದಿನಗಳೇ ಕಳೆದವು , ಅಮ್ಮನ ಕಹಿ ನೆನಪುಗಳ ಅದ್ಯಾಯ ಪ್ರಾರಂಭ . ಚಿಕ್ಕವಳಿದ್ದಾಗಿನಿಂದ ಅಪ್ಪನ ಆರ್ಭಟ ನೋಡಿ ಭಯವಾಗುತ್ತಿತ್ತು , ಎಂದೂ ತಂದೆಯ ಹತ್ತಿರ ಅಕ್ಕರೆಯಿಂದ ಹೋದ ನೆನಪೇ ಇಲ್ಲ , ಕೋಪ ತಾಂಡವವಾಡುತ್ತಿತ್ತು , ಎಲ್ಲದರಲ್ಲೂ ಅವರದೇ ನಡೆಯಬೇಕಿತ್ತು ಮನೆಯಲ್ಲಿ , ಅದಕ್ಕೆ ಒಂದು ಚಿಕ್ಕ ಉದಾಹರಣೆ ,     ಚಿಕ್ಕವರಿದ್ದಾಗ   ದಾವಣಗೆರೆಯಲ್ಲಿ ಕಾನ್ವೆಂಟ್ ಗೆ ಸೇರಿಸಿದ ಅಪ್ಪ, ಎಂದೂ "ಅಪ್ಪ" "ಅಮ್ಮ" ಎಂದು ಕರಿಯಬಾರದು ಅದರ ಬದಲು "ಡ್ಯಾಡಿ"ಮತ್ತು "ಮಮ್ಮಿ" ಅನ್ನಬೇಕು ಎಂದು, ಅಮ್ಮ ಅಂದಾಗಲೆಲ್ಲ ಅಪ್ಪ ಹೊಡೆದು, ಬೈದು ಡ್ಯಾಡಿ, ಮ...

ತಾಯಿಯ ವಾತ್ಸಲ್ಯ

ತಾಯಿಯ  ವಾತ್ಸಲ್ಯ ತಾಯಿ ತನ್ನ ಮಗುವನ್ನು ಎಷ್ಟು ಹಚ್ಚಿಕೊoಡಿರುತ್ತಾಳೆ, ಮಗು ಅಮ್ಮ ಆದೊoಡನೆ ಬಿಟ್ಟ ಕೆಲಸ ಬಿಟ್ಟು ಓಡೋಡಿ ಬರುವಳು, ಮಗುವಿನ ನಂತರ ತಾಯಿಯ  ಪ್ರಪಂಚ ಮಗುವೇ ಆಗಿಬಿಡುತ್ತದೆ. ಮಗು ಎಷ್ಟೇ ದೊಡ್ಡದಾದರೂ ಅಮ್ಮನಿಗೆ ಇನ್ನು ಪುಟ್ಟ ಮಗುವೇ, ಹೀಗೆ ನನ್ನ ಗೆಳತಿಯ ಮನೆಗೆ ಹೋದಾಗ ನನ್ನ ಗೆಳತಿ ಹಂಚಿಕೊಂಡ ಕಥೆ, ನನಗೆ ಆಶ್ಚರ್ಯ ವಾದುದೇನೆOದರೆ ನನ್ನ ಗೆಳತಿ ಭಾವನಾತ್ಮಕಳು ಎಂದು ಅಂದೇ ತಿಳಿದದ್ದು.    ಹೀಗೊಂದು ಅವಳು ಹಂಚಿಕೊಂಡ ಚಿಕ್ಕ ಸಂದರ್ಭ ನಿಮ್ಮ ಮುಂದೆ ಒಂದೆರಡು ಸಾಲುಗಳಲ್ಲಿ ಮದುವೆಯಾಗಿ ೧೪ ವರುಷಗಳು. ಮುದ್ದಾದ ಹನ್ನೊಂದರ ಹೆಣ್ಣು ಮಗು, ಅಕ್ಕರೆ ತೋರುವ ಪತಿ, ಪ್ರೀತಿಯ ಬಂದು ಬಳಗ, ಮತ್ತೊಂದು ಮಗು ಬೇಕೆಂದು ಎಂದು ಯೋಚನೆ ಬಂದಿರಲಿಲ್ಲ  ಕೆಲವೊಮ್ಮೆ ಅನ್ನಿಸಿದರೂ ಆ ಕಡೆ ತಲೆ ಹೋಗಿರಲಿಲ್ಲ, ಸಂಸಾರ ಸಾಗಿತ್ತು. ದಸರಾ ರಾಜ ದಿನಗಳು ಎಂದಿನಂತೆ ಪ್ರಯಾಣದ ಸಿದ್ದತೆ, ಪ್ರಯಾಣದ ಸಂಭ್ರಮದಲ್ಲಿ ನನ್ನ ರಜೆ ದಿನಗಳು ಮುಂದು ಹೋಗಿರುವ ಬಗ್ಗೆ ತಲೆ ಕೊಡಲಿಲ್ಲ, ಐದು ದಿನಗಳ ನಂತರ ಒಮ್ಮೆ ತಲೆಯಲ್ಲಿ ಮಿಂಚಂತೆ ಹಾರಿತು, ಈ ತಿಂಗಳು ನನ್ನ ಋತುಚಕ್ರ ಮುಂದು ಹೋಗಿರುವುದು ನೆನಪಾಯಿತು. ಪತಿರಾಯರಿಗೆ ಹೇಳಲೋ ಬೇಡವೋ ಗೊತ್ತಾಗಲಿಲ್ಲ, ಹೇಗಾದರೂ ಆಗಲಿ ಹೇಗಾದರೂ ಆಗಲಿ ಮಾರುಕಟ್ಟೆಗೆ ಹೋಗಿ ಗರ್ಭಧಾರಣೆಯ ಪರೀಕ್ಷಾ ಕಿಟ್ ತಂದು ಪರಿಶೀಸಲೆಂದು ತಯಾರಾದೆ, ಮರುದಿನ ಬೆಳಗಿನ ಜಾವಾ, ಪರೀಕ್ಷೆ ಮಾಡಿಕೊಂಡ ನಂತರ ಎದ...